
ದಾವಣಗೆರೆ: ಆನ್ಲೈನ್ ಬೆಟ್ಟಿಂಗ್ನಲ್ಲಿ ದೊಡ್ಡ ಮೊತ್ತದ ಹಣ ಕಳೆದುಕೊಂಡ ಯುವಕನೊಬ್ಬ ಜೀವ ಕಳೆದುಕೊಂಡಿರುವ ಘಟನೆ ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸರಸ್ವತಿ ನಗರದ ಶಶಿಕುಮಾರ್ (25) ನೇಣಿಗೆ ಶರಣಾದ ಯುವಕ. ಈತ ತಾನು ಜೀವ ಕಳೆದುಕೊಳ್ಳುವುದಕ್ಕೂ ಮೊದಲು ಸುದೀರ್ಘ 6 ಪುಟ ನೋಟ್ ಬರೆದಿಟ್ಟಿದ್ದಾರೆ.
ಇಷ್ಟೇ ಅಲ್ಲದೇ ಸೆಲ್ಫಿ ವಿಡಿಯೋ ಕೂಡ ಮಾಡಿದ್ದಾನೆ. ಆನ್ಲೈನ್ ಗೇಮಿಂಗ್ನಲ್ಲಿ ಯುವಕ 18 ಲಕ್ಷ ಹಣ ಕಳೆದುಕೊಂಡಿದ್ದನು. ಇದರಲ್ಲಿ 19 ಕೋಟಿಗೂ ಅಧಿಕ ದುಡ್ಡು ಗೆದ್ದಿದ್ದರೂ ಕೊಟ್ಟಿಲ್ಲ.
ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಆನ್ಲೈನ್ ಗೇಮಿಂಗ್ ವೈಬ್ಸೈಟ್ ವಿರುದ್ಧ ಪ್ರಕರಣ ನೀಡಿದರೂ ಸರಿಯಾಗಿ ಸ್ಪಂದಿಸದ ಪೊಲೀಸರ ವಿರುದ್ಧ ಯುವಕ ಆರೋಪ ಮಾಡಿದ್ದಾನೆ.
ಆನ್ಲೈನ್ ಗೇಮಿಂಗ್ ಹಿಂದಿರುವ ಕಾಣದ ಕೈಗಳ ವಿರುದ್ಧ ಕ್ರಮ ಕೈಗೊಳ್ಳಿ. ಮುಂದಿನ ಪೀಳಿಗೆಗೆ ಸಮಸ್ಯೆ ಆಗದಿರಲಿ ಎಂದು ಬರೆದಿದ್ದಾನೆ.