5 ಹುಲಿಗೆ ವಿಷ…ಬಿಚ್ಚಿ ಕೊಳ್ತು ಹಂತಕರ ಜಾಲ

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ಹುಲಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಮಗನನ್ನು ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳು ಅಜ್ಞಾತ ಸ್ಥಳದಲ್ಲಿಟ್ಟು ವಿಚಾರಣೆ ನಡೆಸುತ್ತಿದ್ದಾರೆ.

ಶಿವಣ್ಣ ಹಾಗೂ ಇವರ ಮಗ ಮಾದ ಈ ಇಬ್ಬರು ಸದ್ಯ ಅರಣ್ಯ ಅಧಿಕಾರಿಗಳ ವಶದಲ್ಲಿದ್ದಾರೆ. ತಾಯಿ ಹುಲಿ ಹಾಗೂ 4 ಮರಿಗಳು ಜೀವ ಕಳೆದುಕೊಂಡ ಕೇಸ್​ಗೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಮಂದಿಯನ್ನು ತನಿಖಾ ತಂಡ ವಿಚಾರಣೆಗೆ ಒಳಪಡಿಸಿತ್ತು. ಇದರಲ್ಲಿ 7 ಜನರ ಹೆಸರನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ಈ ವೇಳೆ ಹುಲಿಗಳು ಜೀವ ಕಳೆದುಕೊಂಡ ಜಾಗದಲ್ಲಿ ಪತ್ತೆ ಆಗಿದ್ದ ಹಸುವಿನ ಮಾಲೀಕ ಪತ್ತೆ ಆಗಿದ್ದಾರೆ.

ಶಿವಣ್ಣ ಎಂಬಾತನಿಗೆ ಹಸು ಸೇರಿದೆ ಎಂಬ ಮಾಹಿತಿ ಲಭ್ಯವಾಗಿದೆ‌. ಈ ಹಿನ್ನೆಲೆಯಲ್ಲಿ ಶಿವಣ್ಣ ಹಾಗೂ ಇವರ ಪುತ್ರ ಮಾದನನ್ನ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ನಿನ್ನೆಯೇ ಇಬ್ಬರನ್ನೂ ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿಟ್ಟು ವಿಚಾರಣೆ ನಡೆಸಲಾಗುತ್ತಿದೆ. ಮಗ ಮಾದ ವಿಷ ಇಟ್ಟಿರುವ ಕುರಿತು ಶಂಕೆ ವ್ಯಕ್ತಪಡಿಸಲಾಗಿದೆ. ಆದರೆ ನಿಖರವಾಗಿ ತಿಳಿದಿಲ್ಲ.

ಅನುಮಾನ ಇರುವುದರಿಂದ ಅಪ್ಪ-ಮಗನನ್ನ ವಶಕ್ಕೆ ಪಡೆದು ತೀವ್ರ ವಿಚಾರಣೆ ಮಾಡಲಾಗುತ್ತಿದೆ. ಮತ್ತೊಂದೆಡೆ ಜೀವ ಹೋಗಿರುವ ಹಸುವಿಗೆ ಬೇರೆಯವರು ವಿಷ ಬೆರೆಸಿರಬಹುದು ಎಂಬ ಅನುಮಾನ ಕೂಡ ಇದೆ. ಈ ಇಬ್ಬರ ಜೊತೆಗೆ ಮತ್ತೈದು ಜನರನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಹುಲಿ, ಚಿರತೆ ದಾಳಿಗೆ ಬಲಿಯಾದ ಜಾನುವಾರುಗಳ ಮಾಲೀಕರನ್ನು ಹಾಗೂ ಕಾಡಿಗೆ ಹಸು ಬಿಡುವವರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಲಾಗುತ್ತಿದೆ.

virat kohli

2 thoughts on “5 ಹುಲಿಗೆ ವಿಷ…ಬಿಚ್ಚಿ ಕೊಳ್ತು ಹಂತಕರ ಜಾಲ

Leave a Reply

Your email address will not be published. Required fields are marked *