ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡೋರಿಗೆ ಗೌರವ, ಸನ್ಮಾನ ಇಲ್ಲಿದೆ ರಾಶಿ ಭವಿಷ್ಯ!

ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ.

ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಮೇಷ ರಾಶಿ

  • ನಿಮ್ಮ ಗೆಳೆಯ, ಗೆಳತಿಯರ ವಿವಾಹದ ಶುಭ ಸುದ್ದಿ ಕೇಳುತ್ತೀರಿ
  • ಊಟವೂ ಸಕಾಲಕ್ಕೆ ದೊರೆಯದೇ ಕೋಪ ಹೆಚ್ಚಾಗುವ ಸಾಧ್ಯತೆಯಿರುತ್ತದೆ
  • ನಿಮ್ಮಲ್ಲಿರುವ ಬೇರೆಯವರ ವಸ್ತುಗಳು ಕಳೆದುಹೋಗುವ ಸಾಧ್ಯತೆ ಇದೆ
  • ಮಕ್ಕಳ ಕೆಟ್ಟ ಅಭ್ಯಾಸಗಳಿಂದ ಅವಮಾನ, ಮನಸ್ಸಿಗೆ ನೋವು ಉಂಟಾಗಬಹುದು
  • ಇದರಿಂದ ನಿಮ್ಮ ಹಾಗೂ ನಿಮ್ಮ ಸ್ನೇಹಿತನ ಮಧ್ಯ ಅಸಮಾಧಾನ ಏರ್ಪಟ್ಟು ಕಲಹವಾಗಬಹುದು

ವೃಷಭ

  • ಈ ದಿನ ನಿಮಗೆ ಶತ್ರುಗಳಿಂದ ತೊಂದರೆಯಾಗುವ ಸಾಧ್ಯತೆ
  • ನಿಮ್ಮ ಮನಸ್ಸು ಶುದ್ಧವಾಗಿರಲಿ, ತಾಳ್ಮೆ ಇರಲಿ ಶುಭವಿದೆ
  • ಆಸ್ತಿಯ ವಿಚಾರವಾಗಿ ವಾದ-ವಿವಾದಗಳು ಏರ್ಪಡಬಹುದು
  • ಹಣದ ವಿಚಾರವಾಗಿ ದೈಹಿಕ, ಮಾನಸಿಕ ತೊಂದರೆ ಸಾಧ್ಯತೆ
  • ನಿಮ್ಮ ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ವಸ್ತುಗಳು ಕಳುವಾಗುವ ಸಾಧ್ಯತೆ, ಜಾಗ್ರತೆ ವಹಿಸಿ

ಮಿಥುನ

  • ನಿಮ್ಮ ಷೇರು ವ್ಯವಹಾರವು ಮಧ್ಯಾಹ್ನ 1.30 ರಿಂದ 3 ಗಂಟೆ ಒಳಗಿರಲಿ
  • ಇಂದು ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಚ್ಚರಿಕೆ
  • ವಿವಾಹ ವಿಚಾರದಲ್ಲಿ ಉದ್ವಿಗ್ನ ಪರಿಸ್ಥಿತಿ ಕಾಡಬಹುದು
  • ನಿಮ್ಮ ಕೆಲಸಕ್ಕೆ ಮನೆಯವರ ಸಹಾಯ, ಸಹಕಾರ ದೊರೆಯದೆ ಇರಬಹುದು

ಕಟಕ

  • ರಸ್ತೆಯಲ್ಲಿರುವ ಮರ ಅಥವಾ ಮರದ ಕೊಂಬೆಯಿಂದ ತೊಂದರೆ ಸಾಧ್ಯತೆ
  • ಅಪಘಾತದಿಂದ ಹೆಚ್ಚು ಹಣ ಖರ್ಚಾಗಬಹುದು, ಜಾಗ್ರತೆ ಇರಲಿ
  • ನಿಮ್ಮ ಬುಧ್ಧಿವಂತಿಕೆಯಿಂದ ಎಲ್ಲ ಸಮಸ್ಯೆಗಳನ್ನು ನಿಭಾಯಿಸಿ

ಸಿಂಹ

  • ಹಾಲು,ನೀರು ,ಎಣ್ಣೆ ಇತ್ಯಾದಿ ದ್ರವ ಪದಾರ್ಥಗಳನ್ನು ವ್ಯಾಪಾರ ಮಾಡುವವರಿಗೆ ಲಾಭವಿದೆ
  • ಈ ದಿನ ವಾಹನ ಅಪಘಾತವಾಗುವ ಸಾಧ್ಯತೆ, ಎಚ್ಚರಿಕೆ ಇರಲಿ
  • ಇಂದು ಅನಿರೀಕ್ಷಿತ ಹಣ ನಿಮ್ಮ ಕೈ ಸೇರಬಹುದು
  • ನಿಮ್ಮ ಪಾಲುದಾರಿಕೆಯಿಂದ ಹೊರ ಬರುವ ಪರಿಸ್ಥಿತಿ ನಿರ್ಮಾಣವಾಗಬಹುದು

ಕನ್ಯಾ

  • ಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಗೌರವ, ಪುರಸ್ಕಾರ ದೊರೆಯುವ ದಿನ
  • ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಗೌರವ, ಸನ್ಮಾನ ಸಿಗುತ್ತದೆ
  • ಭೂವ್ಯಾಪಾರಿಗಳಿಗೆ ಉತ್ತಮವಾದ ದಿನ
  • ಉತ್ತಮವಾದ ಕಾರ್ಯಗಳು ಆರಂಭವಾಗಬಹುದು

ತುಲಾ

  • ಅನಗತ್ಯ ಹಣ ಖರ್ಚು ಮಾಡಿ ಸಮಸ್ಯೆ ಬಗೆಹರಿಯದೆ ಒದ್ದಾಡಬೇಕಾಗಬಹುದು
  • ಇಂದು ನಿಮ್ಮ ಆತ್ಮವಿಶ್ವಾಸದ ಜೊತೆಗೆ ನಿಮ್ಮ ಪ್ರತಿಭೆಗೆ ತಕ್ಕ ಫಲವು ದೊರಕಬಹುದು
  • ನಿಮ್ಮ ಪ್ರತಿಭೆಯನ್ನ ವೈಯಕ್ತಿಕ ಲಾಭಕ್ಕಿಂತ ಸಮಾಜ ಸೇವೆಗೆ ಉಪಯೋಗಿಸಿ
  • ರಾಜಕೀಯ ವ್ಯಕ್ತಿಗಳ ಹಾಗೂ ಗಣ್ಯರ ಬೆಂಬಲ ಹೆಚ್ಚಾಗಬಹುದು

ವೃಶ್ಚಿಕ

  • ಪ್ರೇಯಸಿಯೊಂದಿಗೆ ನಿಮ್ಮ ಪ್ರಯಾಣ ಆನಂದವಾಗಿರುತ್ತದೆ
  • ಈ ರಾಶಿಯ ಸ್ತ್ರೀಯರು ಷೇರು ಮಾರುಕಟ್ಟೆಯಲ್ಲಿ ಹಣವನ್ನು ತೊಡಗಿಸಿ ಲಾಭ ಪಡೆಯುತ್ತಾರೆ
  • ಹಳೆಯ ಷೇರುಗಳಿದ್ದರೆ ಇಂದು ಉತ್ತಮ ಬೆಲೆಗೆ ಮಾರಾಟ ಮಾಡಬಹುದು

ಧನಸ್ಸು

  • ವ್ಯಾಪಾರ – ವ್ಯವಹಾರಗಳಲ್ಲಿ ತಪ್ಪು ಸಂಭವಿಸಬಹುದು
  • ಸ್ನೇಹಿತರು ನಿಮ್ಮನ್ನು ವ್ಯವಹಾರದಿಂದ ಹೊರಗಿಟ್ಟು ರಹಸ್ಯವಾಗಿ ವ್ಯವಹರಿಸುತ್ತಾರೆ

ಮಕರ

  • ಮ್ಮ ಕಾರ್ಯಕ್ಷೇತ್ರದಲ್ಲಿರುವ ಚಿಂತನೆ, ಯೋಜನೆಗಳಾಗಲಿ ಯಾರಿಗೂ ಸರಿಯಾಗಿ ಅರ್ಥವಾಗೋದಿಲ್ಲ
  • ನಿಮಗೆ ಯಾರ ಸಹಕಾರವೂ ಸರಿಯಾಗಿ ಸಿಗುವುದಿಲ್ಲ
  • ನಿಮ್ಮಿಂದ ಹಲವಾರು ಜನ ಉಪಕಾರ ಪಡೆದು ನಿಮ್ಮ ಸ್ವಭಾವಕ್ಕೆ ಬೇಸತ್ತು ದೂರವಾಗುತ್ತಾರೆ

ಕುಂಭ

  • ವಾಹದ ದೃಷ್ಟಿಯಿಂದ ನಿಮ್ಮ ಬಂಧುಗಳು ಹೊಸ ಸಂಬಂಧ ಬೆಳೆಸಬಹುದು
  • ನಿಮ್ಮ ಮಾತು ಇಂದು ಬಹಳ ಮುಖ್ಯವಾಗಿರುತ್ತದೆ
  • ಈ ದಿನ ನಿಮ್ಮ ಹಣದ ಸ್ಥಿತಿ ಸುಧಾರಿಸುತ್ತದೆ

ಮೀನ 

  • ಚರ್ಮರೋಗಕ್ಕೆ ಸಂಬಂಧಿಸಿದ ವ್ಯಕ್ತಿಗಳು ಜಾಗರೂಕರಾಗಿರಬೇಕು
  • ನಿಮ್ಮ ಚರ್ಮರೋಗ ಹೆಚ್ಚಾಗುವ ಸೂಚನೆಗಳಿವೆ
  • ವೈದ್ಯರು ಹೇಳಿದ ಪಥ್ಯಗಳನ್ನು ಶಿಸ್ತಿನಿಂದ ಪಾಲಿಸಬೇಕು
  • ಸರ್ಕಾರಿ ಉದ್ಯೋಗಿಗಳಿಗೆ ಶುಭದಿನ ಆನಂದವಾಗಿರುತ್ತೀರಿ
  • ಚರ್ಮರೋಗಿಗಳು ಅಮೃತಬಳ್ಳಿ ಎಲೆಗಳನ್ನು ಸೇವಿಸಿ

https://bengalorefirst.com/wp-admin

twitter

Leave a Reply

Your email address will not be published. Required fields are marked *